+91 824 243 9895
valored@gmail.com

Get Involved

GET INVOLVED

Be a member of Education Resource Centre and become a change agent in bringing transformation (To know more about ERC)

Be a volunteer: If you wish to give back to the society –

You can be part time teachers in govt. Schools of 8 taluks.

Conduct activities for Child right clubs

Volunteer for Child line 1098.

As a Resource person: Your valuable talents can reach out to the needy in empowering   through    conducting training on SDMCs, RTE Act, POCSO, Gender, CPC, Panchayath raj.

Designing art for IEC materials: If you are a student with special talents and interest and want to explore your creativity, you can join us in effective  designing of pictograph for behavior change communication.

We all have talents let’s prove it!….Let’s decorate the govt. schools.

Theatre artist- train children

Networking and advocacy with various stakeholders at state levels

To raise funds/ event management

Designing the website

Read more

How We Work

PADI is a registered society that aims at working towards Education for creation of just human society.  This society is established as a public, secular, service institution, serving the underprivileged irrespective of their caste, religion or creed, with special emphasis on  service for the weaker sections of society in the areas of education and social development having the objectives i.e., to strengthen the formal education system, undertake and assist Community Development Programmes, to create public awareness regarding children Problems, Child Labour, Child Rights, gender, Health/HIV/AIDS, studies And various services.  PADI is well recognized not only among various Government line Department in District of Udupi and Dakshina Kannada, but also at Karanataka State.  Hence department avail the services of PADI in their programme as collaboration work or as Resource persons.

Project-1: Quality education in Govt.  Primary Schools in Karnataka:

PADI through this project reaches out to children of 52 Schools from rural and remote areas, Teacher, SDMC and Community. PADI strongly believe in working with collaboration with the Government department and conduct various programme. As a result we are able to bring constructive changes and also sensitize the community in child rights.

Major focus area

  1. Strengthening the SDMC.
  2. Facilitate the teacher trainees in making them humane versatile, effective and reflective
  3. Team of RTE promoters from 4 divisions of Karnataka state work effectively for implementation of RTE Act and advocate for its effective implementation
  4. Strengthening the RTE Cell at the block level.
  5. Strengthening the child right clubs in schools.
  6. Training the children in Art and Craft.
  7. Sensitizing the community towards child rights.
  8. Sensitizing the elected representatives towards creating safe environments.
  9. Regular interaction with Govt. line department’s education, Panchayath raj, district administration and police.
  10. Strengthening the child protection systems in grass root level like CPC in schools and village level.
  11. Sensitizing the Panchayath towards the roles and responsibilities of officials and elected representatives in creating child friendly environment.
  12. Motivating the community such as self help group youth groups/clubs to work for promotion and protection of child rights.
  13. Networking with various stakeholders for effective implementation of child rights.

Ensuring Community participation for Protection of Child Right: PADI through its VALORED concept intervene in 8 taluks of D.K and Udupi, as a result people with the common interest joined  together in forming a network of Education and child rights enthusiast . Gradually a strong membership resulted in formation of Education Resource centre at taluk level and its Federation at District level. Education Resource centre have its own executive Committee, they are monitoring and running the ERC. Also have a action Plan and works for the betterment of education system.

Major activities of ERC-

  1. Advocacy
  2. Awareness
  3. Resource person team
  4. Conduct need based surveys and Studies
  5. Linkages with state level networks
  6. Redressal of Child right violation cases

Project-2. Childline Mangaluru (PADI)

  • 24*7 attending the distress calls
  • Counseling
  • Rescue and rehabilitation
  • Open house- creating awareness on child rights to the schools and community
  • Childline se Dosthi week
Read more

ಅರ್.ಟಿ.ಇ ಕುರಿತು ಕೇಳಲಾದ ಪ್ರಶ್ನೆಗಳು

ಪ್ರಶ್ನೆ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ೨೦೦೯ ಯಾವ ದಿನಾಂಕದಿಂದ ಜಾರಿಗೆ ಬಂದಿದೆ?
ಉತ್ತರ: ೬-೧೪ ವಯೋಮಿತಿಯ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ (೧ ರಿಂದ ೮ನೇ ರಗತಿವರೆಗಿನ) ಶಿಕ್ಷಣವನ್ನು ನೆರೆಹೊರೆಯ ಶಾಲೆಯಲ್ಲಿ ಒದಗಿಸಬೇಕೆಂದು ಕೇಂದ್ರ ಸರ್ಕಾರವು ರೂಪಿಸಿದ ಶಾಸನ (ಕಾಯಿದೆ) ಈ ಕಾಯಿದೆಯು ಭಾರತ ಗಣರಾಜ್ಯದ ೬೦ನೇ ವರ್ಷದಲ್ಲಿ ಸಂಸತ್ತಿನಲ್ಲಿ ಅನುಮೋದನೆಗೊಂಡು ಅಂಗೀಕಾರವಾಗಿ ದಿನಾಂಕ:೨೭.೦೮.೨೦೦೯ ರ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ದಿನಾಂಕ: ೦೧.೦೪.೨೦೧೦ ರಿಂದ ಜಾರಿಗೆ ಬಂದಿರುತ್ತದೆ.

ಪ್ರಶ್ನೆ:ಶಿಕ್ಷಣ ಹಕ್ಕು ಕಾಯಿದೆ ೨೦೦೯ ರ ಕಾಯಿದೆಯ ಪ್ರಕಾರ ಮಗು ಎಂದರೆ ಯಾರು ?
ಉತ್ತರ: ಮಗು ಎಂದರೆ ಆರರಿಂದ ಹದಿನಾಲ್ಕು ವರ್ಷದೊಳಗಿನ ಗಂಡು ಅಥವಾ ಹೆಣ್ಣು ಮಗು.

ಪ್ರಶ್ನೆ:ಈ ಕಾಯಿದೆಯಲ್ಲಿ ಎಷ್ಟು ಅಧ್ಯಾಯ ಮತ್ತು ಎಷ್ಟು ಸೆಕ್ಷನ್‌ಗಳಿವೆ?
ಉತ್ತರ:ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆಯಲ್ಲಿ ೭ ಅಧ್ಯಾಯ ಮತ್ತು ೩೭ ಸೆಕ್ಷನ್‌ಗಳಿವೆ.

ಪ್ರಶ್ನೆ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ೨೦೦೯ ಯಾರ್‍ಯಾರಿಗೆ ಅನ್ವಯವಾಗುತ್ತದೆ?
ಉತ್ತರ: ಈ ಕಾಯಿದೆ ಮತ್ತು ನಿಯಮಾವಳಿಗಳ ಪ್ರಕಾರ ೬ ರಿಂದ ೧೪ ವಯೋಮಿತಿಯ ಎಲ್ಲ ಮಕ್ಕಳು. ತಮ್ಮ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಬಹುದಾಗಿದೆ.

ಪ್ರಶ್ನೆ: ವಯಸ್ಸಿಗೆ ತಕ್ಕ ತರಗತಿ ಶಿಕ್ಷಣದ ಕುರಿತಂತೆ ಕಾಯಿದೆಯು ಏನನ್ನು ಹೇಳುತ್ತದೆ.
ಉತ್ತರ: ಆರು ವರ್ಷ ದಾಟಿದ ಯಾವುದೇ ಮಗು ಶಾಲೆಗೆ ದಾಖಲಾಗದೆ ಇದ್ದ ಪಕ್ಷದಲ್ಲಿ ಅಥವಾ ಶಾಲೆಗೆ ಸೇರಿಸಿದ್ದರೂ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಲು ಆಗದಿದ್ದ ಪಕ್ಷದಲ್ಲಿ ಅಂತಹ ಮಗುವನ್ನು ವಯಸ್ಸಿಗೆ ಸೂಕ್ತವಾದ ತರಗತಿಗೆ ಸೇರಿಸಬೇಕು. ವಯಸ್ಸಿಗೆ ಅನುಗುಣವಾಗಿತರಗತಿಗೆ ಸೇರಿಸಿದ್ದರೂ ತನ್ನ ಇತರ ಸಹಪಾಠಿಗಳೊಂದಿಗೆ ಸಮಾನತೆ ಸಾಧಿಸಲು ನೆರವಾಗಲು ವಿಶೇಷವಾದ ತರಬೇತಿಯನ್ನು ನಿರ್ದಿಷ್ಟ ಸಮಯದಲ್ಲಿ ಹೊಂದುವಂತೆ ಶಿಫಾರಸ್ಸು ಮಾಡಬಹುದು. ಹಾಗೂ ಈ ವಿಧವಾದ ಶಿಕ್ಷಣಕ್ಕೆ ಪ್ರವೇಶ ಹೊಂದಿದ ಮಕ್ಕಳು ತಮ್ಮ ೧೪ ವರ್ಷ ದಾಟಿದ ನಂತರವು ಪ್ರಾಥಮಿಕ ಶಿಕ್ಷಣವನ್ನು ಪೂರ್ತಿ ಮಾಡುವವರೆಗೆ ಉಚಿತ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಪ್ರಶ್ನೆ:ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವಾಗ ವರ್ಗಾವಣೆ ಪತ್ರಗಳಿಲ್ಲದೆ ಇದ್ದಲ್ಲಿ ದಾಖಲಾತಿ ಮಾಡಲು ಕಾಯಿದೆಯಲ್ಲಿ ಅವಕಾಶವಿದೆಯೇ?
ಉತ್ತರ: ಅವಕಾಶ ಇದೆ. ವರ್ಗಾವಣೆ ಪತ್ರವನ್ನು ಪಡೆಯುವಲ್ಲಿ ತಡವಾಗುವುದು ಅಥವಾ ವರ್ಗಾವಣೆ ಪತ್ರವನ್ನು ನೀಡಲು ನಿರಾಕರಿಸುವುದರಿಂದ ಆಗುವ ವಿಳಂಬದ ಕಾರಣದಿಂದ ಮಕ್ಕಳಿಗೆ ಶಾಲೆಗೆ ಪ್ರವೇಶವನ್ನು ನಿರಾಕರಿಸಲಾಗದು. ಹಾಗೆಯೇ ಶಾಲೆಯ ಜವಬ್ದಾರಿ ಹೊಂದಿದ ಶಿಕ್ಷಕರು ಮತ್ತು ಆಡಳಿತ ವ್ಯವಸ್ಥೆ ಕಾರಣವಿಲ್ಲದೆ ವರ್ಗಾವಣೆ ಪತ್ರವನ್ನು ಕೊಡಲು ತಡ ಮಾಡಿದಲ್ಲಿ ಅಂತವರ ಮೇಲೆ ಸೇವಾ ನಿಯಮಗಳಂತೆ ಕ್ರಮ ಕೈಗೊಳ್ಳಬಹುದು. ಹಾಗು ವರ್ಗಾವಣೆ ಪತ್ರವನ್ನು ಮಗುವಿನ ಹೆತ್ತವರ ಹಾಗು ಮಗುವಿನ ಕೈಯಲ್ಲಿ ನೇರವಾಗಿ ಸಂಬಂದಿತ ಶಾಲೆಯು ನೀಡದೆ ನೇರವಾಗಿ ಮಗುವನ್ನು ಶಾಲೆಗೆ ಸೇರಿಸಿ ಮಗು ಹಿಂದೆ ಕಲಿಯುತ್ತಿದ್ದ ಶಾಲೆಯಿಂದ ನೇರವಾಗಿ ವರ್ಗಾವಣೆ ಪತ್ರವನ್ನು ಪಡೆದುಕೊಳ್ಳಬೇಕು.

ಪ್ರಶ್ನೆ: ಶಿಕ್ಷಣ ಹಕ್ಕು ಕಾಯಿದೆಯಲ್ಲಿ ೨೫% ಸೀಟುಗಳನ್ನು ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವಕಾಶಗಳಿವೆ ಎಂದು ತಿಳಿಯಿತು. ಅದರ ಪ್ರಕಾರ ಪ್ರವೇಶಾತಿಯನ್ನು ಪಡೆಯಲು ಅನುಸರಿಸ ಬೇಕಾದ ಕ್ರಮಗಳೇನು?
ಉತ್ತರ:ಪ್ರತೀ ವರ್ಷವೂ ಶೈಕ್ಷಣಿಕ ವರ್ಷ ಪ್ರಾರಂಭದ ಮೊದಲೆ ರಾಜ್ಯ ಮಟ್ಟದಿಂದಲೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ೨೫% ಮೀಸಲಾತಿ ಆಯೆ ಪ್ರಕ್ರಿಯೆಗೆ ಸಂಬಂದಿಸಿದಂತೆ ಸುತ್ತೋಲೆಯನ್ನು ಹೊರಡಿಸುತ್ತದೆ. ಹಾಗು ಈ ಸುತ್ತೋಲೆಯಂತೆ ಆಯಾಯಾ ತಾಲೂಕಿನ ಕ್ಷೇತ್ರ ಶಿಕ್ಷಣಾದಿಕಾರಿಗಳ ಮೂಲಕ ಅಪೇಕ್ಷೀತ ಪೋಷಕರು ಮಾಹಿತಿ ಪಡೆದುಕೊಂಡು ಆನ್ ಲೈನ್ ಮೂಲಕ ೨೫ % ಸೀಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಸುತ್ತೋಲೆಯಲ್ಲಿ ಸೂಚಿಸಿದ ನಿಯಮಗಳಂತೆ ಆಯ್ಕೆ ಪ್ರಕ್ರಿಯೆಯು ಆಯಾಯಾ ತಾಲೂಕು ಹಂತದಲ್ಲಿ ನಡೆಯುತ್ತದೆ.

ಪ್ರಶ್ನೆ: ೨೫% ಮೀಸಲಾತಿಯಲ್ಲಿ೧೨ (೧) (ಸಿ) ಪ್ರಕಾರ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಅಧಿನಿಯಮದಂತೆ ದಾಖಲಾದ ಮಕ್ಕಳಿಗೆ ತಾರತಮ್ಯ ನೀತಿ ಅನುಸರಿಸಿದರೆ ಏನು ಕ್ರಮ ತೆಗೆದುಕೊಳ್ಳುತ್ತೀರಿ?
ಉತ್ತರ: ಶಿಕ್ಷಣ ಹಕ್ಕು ಕಾಯಿದೆ ೨೦೦೯ ಮತ್ತು ನಿಯಮಗಳು ೨೦೧೨ ರ ೧೨ (೧) (ಸಿ) ಪ್ರಕಾರ ಮೀಸಲಾತಿ ಸೌಲಭ್ಯದಡಿ ದಾಖಲಾದ ಮಕ್ಕಳಿಗೆ ತಾರತಮ್ಯ ಮಾಡಿದಲ್ಲಿ ಸೇವಾ ನಿಯಮದಂತೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಕುರಿತ ಲಿಖಿತ ದೂರನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳವರಿಗೆ ಸಲ್ಲಿಸಬಹುದು. ಹಾಗು ಈ ಹಂತದಲ್ಲಿ ಸಮಂಜಸವೆನಿಸದಿದ್ದಲ್ಲಿ ಸೂಕ್ತ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಪ್ರಶ್ನೆ: ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಶಾಲೆಗೆ ಸೇರಿಸಿದ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಸಂಬಂಧಿಸಿದ ಶಾಲೆಯಲ್ಲಿ ನೀಡುತ್ತಾರೆಯೇ?
ಉತ್ತರ:ಶಾಲಾ ಆಡಳಿತ ಮಂಡಳಿಯು ಪಠ್ಯಪುಸ್ತಕ, ಸಮವಸ್ತ್ರದ ಖರ್ಚನ್ನು ಶಾಲೆಯ ಒಟ್ಟು ವೆಚ್ಚದಲ್ಲಿ ಸೇರಿಸಿದ್ದರೆ, ಆ ಶಾಲೆಯಲ್ಲಿ ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೂ ಸಹ ಉಚಿತವಾಗಿ ನೀಡಬೇಕಾಗುತ್ತದೆ.

ಪ್ರಶ್ನೆ:ಈ ಕಾಯಿದೆಯಲ್ಲಿ ಶಾಲೆಗಳು ಕೆಲವು ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ ಹೌದಾ?
ಉತ್ತರ: ಹೌದು. ಎಲ್ಲಾ ಶಾಲೆಗಳು ಸರಕಾರಿ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಮೂಲಭೂತ ಸೌಕರ್ಯ, ಕಲಿಕಾ ವಸ್ತುಗಳು ಮತ್ತು ಉಪಕರಣಗಳು,ತರಬೇತಿ ಹೊಂದಿದ ಶಿಕ್ಷಕರು ಮತ್ತು ನಿರ್ಧರಿತವಾಗಿ ಆದೇಶಿಸಿರುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿ ಅನುಪಾತ ಮತ್ತು ಬೋಧನಾ ಗಂಟೆಗಳು. ಈ ಎಲ್ಲಾ ಸೌಲಭ್ಯಗಳ ಬಗ್ಗೆ ಕಾಯಿದೆಯ ಶೆಡ್ಯೂಲ್ ನಲ್ಲಿ ವಿವರಿಸಲಾಗಿದೆ.

ಪ್ರಶ್ನೆ:ಕೆಲವು ವ್ಯಕ್ತಿಗಳ ಪ್ರಕಾರ ಕಾಯಿದೆಯು ಕೇವಲ ಮಕ್ಕಳ ಹಕ್ಕುಗಳ ಬಗ್ಗೆ ಮಾತ್ರ ಕಾಳಜಿ ಹೊಂದಿದೆ ಎಂದು, ಗುಣಮಟ್ಟದ ಶಿಕ್ಷಣ ಅದರಲ್ಲೂ ಕಲಿಕಾ ಪರಿಣಾಮಗಳ ಬಗ್ಗೆ ಕಡಿಮೆ ಕಾಳಜಿ ಹೊಂದಿದೆ ಎನ್ನಲಾಗಿದೆ. ಹೌದಾ?
ಉತ್ತರ: ಇಲ್ಲ. ಕಾಯಿದೆಯ ಪ್ರಕಾರ ಗುಣಮಟ್ಟದ ಶಿಕ್ಷಣವು ಭಾರತದ ಪ್ರತಿಯೊಂದು ಮಗುವಿನ ಒಂದು ಮೂಲಭೂತ ಹಕ್ಕಾಗಿದೆ, ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಕಾಯಿದೆಯ ಅಧ್ಯಾಯ ೫ ರಲ್ಲಿ ವಿಸ್ತಾರವಾಗಿ ವಿವರಿಸಲಾಗಿದೆ. ಇದು ಶಾಲೆಯ ಸೌಕರ್ಯ, ಸಾಕಷ್ಟು ಸಂಖ್ಯೆಯ ಅರ್ಹಶಿಕ್ಷಕರು, ಪಠ್ಯಕ್ರಮ, ಶಿಕ್ಷಣಶಾಸ್ತ್ರ, ಫಲಿತಾಂಶ, ಮೌಲ್ಯಮಾಪನ, ಶಾಲಾ ಕಾರ್ಯನಿರ್ವಹಣೆಗೆ ಕುರಿತಂತೆ ಮೇಲ್ವಿಚಾರಣೆ ಮಾಡಲು ಶಾಲಾ ನಿರ್ವಹಣಾ ಸಮಿತಿ ರಚನೆಯ ಬಗ್ಗೆ ವಿವರಿಸಲಾಗಿದೆ. ಅದರಲ್ಲೂ ಕಲಿಕಾ ಪರಿಣಾಮಗಳ ಬಗ್ಗೆ ಸಾಕಷ್ಟು ವಿವರಿಸಲಾಗಿದೆ.

ಪ್ರಶ್ನೆ:ಕಾಯಿದೆಯಲ್ಲಿ ಶಿಕ್ಷಕ- ವಿದ್ಯಾರ್ಥಿ ಅನುಪಾತವನ್ನು ಏಕೆ ಶಿಫಾರಸ್ಸು ಮಾಡಲಾಗಿದೆ.?
ಉತ್ತರ: ದೊಡ್ಡ ಪ್ರಮಾಣದ ತರಗತಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಕಡಿಮೆ ಸಂಖ್ಯೆಯ ಶಿಕ್ಷಕರಿಗೆ ಸಾಧ್ಯವಾಗುವುದಿಲ್ಲ ಅದಕ್ಕಾಗಿ ೧-೫ ತರಗತಿಯ ೩೦ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಮತ್ತು ೬-೮ ನೆ ತರಗತಿಯ ೩೫ ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಅನುಪಾತವನ್ನು ನಿರ್ಧರಿಸಲಾಗಿದೆ.

ಪ್ರಶ್ನೆ:ಕಾಯಿದೆಯಲ್ಲಿ ಆದೇಶಿಸಿರುವಂತೆ ಶಾಲೆಯಲ್ಲಿ ಕೆಲಸದ ಸಮಯ ಎಷ್ಟು ?
ಉತ್ತರ: ೧-೫ ನೆ ತರಗತಿಯವರೆಗೆ ೨೦೦ ದಿನಗಳು ಮತ್ತು ೮೦೦ ಗಂಟೆಗಳ ಬೋಧನಾ ಸಮಯ ಮತ್ತು ೬-೮ ನೇ ತರಗತಿಯವರೆಗೆ ೨೨೦ ದಿನಗಳು ಮತ್ತು ೧೦೦೦ ಗಂಟೆಗಳ ಬೋಧನಾ ಸಮಯವನ್ನು ನಿರ್ಧರಿಸಲಾಗಿದೆ.

ಪ್ರಶ್ನೆ:ಶಿಕ್ಷಕರ ಅರ್ಹತೆಯ ಬಗ್ಗೆ ಕಾಯಿದೆಯಲ್ಲಿ ಏನನ್ನು ಉಲ್ಲೇಖಿಸಲಾಗಿದೆ. ?
ಉತ್ತರ: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಓಅಖಿಇ)ಹೊರಡಿಸಿರುವ ಮಾರ್ಗದರ್ಶಿಯ ಪ್ರಕಾರ ಶಿಕ್ಷಕರ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಈ ಮಾರ್ಗದರ್ಶಿಯ ಪ್ರಕಾರ ಅರ್ಹತೆ ಹೊಂದಿರದ ವ್ಯಕ್ತಿಗಳನ್ನು ಯಾವುದೇ ಶಾಲೆಯು ನೇಮಕ ಮಾಡಿಕೊಳ್ಳದಂತೆ ಕಾಯಿದೆಯು ತಿಳಿಸಿದೆ. ಮತ್ತು ಕಾಯಿದೆ ಜಾರಿಗೆ ಬಂದು ೩ ವರ್ಷಗಳ ಅವಧಿಯೋಲಗೆ ಶಿಕ್ಷಕರ ಶೈಕ್ಷಣಿಕ ಅರ್ಹತೆಯನ್ನುಪೂರ್ತಿಗೊಳಿಸಲು ಅವಕಾಶ ನೀಡಿದೆ.

ಪ್ರಶ್ನೆ:ಶಿಕ್ಷಕರಿಗೆ ಶಾಲಾ ಕರ್ತವ್ಯವನ್ನು ಹೊರತುಪಡಿಸಿ ಇತರ ಸರಕಾರಿ ವಿಶೇಷ(ಶೈಕ್ಷಣಿಕವಲ್ಲದ) ಕರ್ತವ್ಯಗಳಿಗೆ ನಿಗದಿಪಡಿಸುವುದು ಶಿಕ್ಷಕರಿಗೆ ಹೊರೆಯಾಗಿದೆ ಎಂಬ ಮಾತು ರೂಡಿಯಲ್ಲಿದೆ ಅದರೆ ಕಾಯಿದೆಯಲ್ಲಿ ವಿಶೇಷ ಕರ್ತವ್ಯಕ್ಕೆ ನೇಮಿಸಲು ಅವಕಾಶ ನೀಡಲಾಗಿದೆಯೇ?
ಉತ್ತರ: ಯಾವುದೇ ಶಿಕ್ಷಕರನ್ನ ಶೈಕ್ಷಣಿಕವಲ್ಲದ ಕೆಲಸಗಳಿಗೆ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ, ವಿಪತ್ತು ನಿರ್ವಹಣೆ, ಸ್ಥಳೀಯ ಸರ್ಕಾರಗಳು, ರಾಜ್ಯ ವಿಧಾನ ಸಭೆ ಮತ್ತು ಸಂಸತ್ತು ಚುನಾವಣೆ ಹೊರತು ಪಡಿಸಿ, ಇತರೆ ಕೆಲಸಗಳಿಗೆ ನೇಮಿಸಬಾರದು.

ಪ್ರಶ್ನೆ:ಶಿಕ್ಷಕರು ಖಾಸಗಿ ಪಾಠ ಮಾಡಲು ಅವಕಾಶ ನೀಡಲಾಗಿದೆಯೇ?
ಉತ್ತರ: ಯಾವುದೇ ಶಿಕ್ಷಕರು ಖಾಸಗಿ ಪಾಠವನ್ನು ಮಾಡುವುದು ಅಥವಾ ಖಾಸಗಿಯಾಗಿ ಕೆಲಸದಲ್ಲಿ ನಿರತರಾಗಬಾರದು ಎಂದು ಕಾಯಿದೆಯು ತಿಳಿಸುತ್ತದೆ.

ಪ್ರಶ್ನೆ:ಈ ಕಾಯಿದೆಯಲ್ಲಿ ಪ್ರತಿ ಶಾಲೆಯು ಶಾಲಾ ಆಡಳಿತ ಸಮಿತಿಯನ್ನು ರಚಿಸುವುದು ಕಡ್ಡಾಯ ಮಾಡಲಾಗಿದೆ. ಯಾಕೆ?
ಉತ್ತರ: ಶಾಲಾ ಆಡಳಿತ ಸಮಿತಿಯು ಹೆತ್ತವರನ್ನು ಒಳಗೊಂಡ ಸಮಿತಿಯಾಗಿದ್ದು ಪ್ರಮುಖವಾಗಿ ಶಾಲೆಯ ಮೇಲ್ವಿಚಾರಣೆ ಮತ್ತು ಶಾಲಾ ಯೋಜನೆಯನ್ನು ಸುಧಾರಿಸುವ ಸಾಮಾರ್ಥ್ಯವನ್ನು ಹೊಂದಿದೆ.

ಪ್ರಶ್ನೆ:ಹೊಸ ಶಾಲೆಯನ್ನು ತೆರೆಯುವ ಕುರಿತು ಈ ಕಾಯಿದೆಯು ಏನನ್ನು ಹೇಳುತ್ತದೆ.?
ಉತ್ತರ: ಸರಕಾರ ಮತ್ತು ಸ್ಥಳೀಯ ಸರಕಾರಗಳು ಸಂಪೂರ್ಣವಾಗಿ ಸ್ವಾಮಿತ್ವವನ್ನು ಹೊಂದಿರುವ ಮತ್ತು ಆರಂಭಿಸಿರುವ ಶಾಲೆಗಳನ್ನು ಹೊರತು ಪಡಿಸಿ ಬೇರೆ ಯಾರೆ ಆಗಲಿ ಈ ಕಾಯಿದೆಯು ಆರಂಭವಾದ ಮೇಲೆ ಸರಕಾರದ ಮನ್ನಣೆಗಾಗಿ ಅರ್ಜಿ ಸಲ್ಲಿಸಿ ಮನ್ನಣೆ ಪಡೆಯಬೇಕು. ಅಂತಹ ಮನ್ನಣೆ ಇಲ್ಲದೆ ಶಾಲೆಗಳನ್ನು ತೆರೆಯುವಂತಿಲ್ಲ.

ಪ್ರಶ್ನೆ:ಮಕ್ಕಳನ್ನು ಶಾಲೆಗೆ ದಾಖಲು ಮಾಡುವಾಗ ಮಗುವಿನ ವಯಸ್ಸನ್ನು ನಿರ್ಧರಿಸುವ ಪ್ರಮಾಣ ಪತ್ರ ಇಲ್ಲದೆ ಇದ್ದರೆ ಶಾಲೆಗೆ ದಾಖಲು ಮಾಡಬಹುದಾ?
ಉತ್ತರ:ಕಾಯಿದೆಯು ಉಲ್ಲೆಖಿಸಿರುವಂತೆ ಮಗುವಿನ ವಯಸ್ಸನ್ನು ನಿರ್ಧರಿಸುವ ಪ್ರಮಾಣ ಪತ್ರ ಲಭ್ಯವಿಲ್ಲದೆ ಇದ್ದರೆ ಯಾವುದೇ ಮಗುವಿಗೆ ಶಾಲಾ ಪ್ರವೇಶವನ್ನು ನಿರಾಕರಿಸುವಂತಿಲ್ಲ.

ಪ್ರಶ್ನೆ:ಮಗುವಿನ ಉತ್ತಿರ್ಣತೆ ಮತ್ತು ಕಲಿಕೆಗೆಸಂಬಂದಿಸಿದಂತೆ ಕಾಯಿದೆಯು ಏನನ್ನು ಹೇಳುತ್ತದೆ?
ಉತ್ತರ:ಯಾವುದೇ ಮಗುವನ್ನು ಯಾವುದೇ ಕಾರಣಕ್ಕೂ ತರಗತಿಯಲ್ಲಿ ನಪಾಸು ಮಾಡಿ ಉಳಿಸಿಕೊಳ್ಳುವಂತಿಲ್ಲ ಮತ್ತು ಎಲಿಮೆಂಟರಿ ಶಿಕ್ಷಣ ಪೂರೈಸುವ ತನಕ ಶಾಲೆಯಿಂದ ಹೊರಹಾಕುವಂತಿಲ್ಲ. ಹಾಗೂ ಯಾವುದೇ ಮಗುವಿಗೆ ದೈಹಿಕ ಶಿಕ್ಷೆ ಅಥವಾ ಮಾನಸಿಕ ಶೋಭೆಗೆ ಗುರಿ ಮಾಡಬಾರದು.

ಪ್ರಶ್ನೆ:ಪಠ್ಯಕ್ರಮ ಮತ್ತು ಮೌಲ್ಯಮಾಪನ ಪ್ರಕ್ರೀಯೆಗಳ ಬಗ್ಗೆ ಕಾಯಿದೆಯಲ್ಲಿ ಏನನ್ನು ಹೇಳಲಾಗಿದೆ.?
ಉತ್ತರ:ಎಲಿಮೆಂಟರಿ ಶಿಕ್ಷಣದ ಪಟ್ಯ ಮತ್ತು ಮೌಲ್ಯಮಾಪನದ ಪ್ರಕ್ರೀಯೆಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದ ಶೈಕ್ಷಣಿಕ ಪ್ರಾಧಿಕಾರವು ನಿರ್ಧರಿಸುತ್ತದೆ. ಮತ್ತು ಕಾಯಿದೆಯ ಸೆಕ್ಷನ್ ೨೯ ರ ಪ್ರಕಾರ ಪಠ್ಯ ಮತ್ತು ಮೌಲ್ಯ ಮಾಪನ ಪ್ರಕ್ರೀಯೆಗಳ ವಿಧಿವಿಧಾನಗಳನ್ನು ನಿರ್ಮಿಸುವಾಗ ಈ ಕೆಳಗಿನವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಶಿಕ್ಷಣವು ಸಂವಿಧಾನವು ಎತ್ತಿಹಿಡಿದಿರುವ ಮೌಲ್ಯಗಳಿಗೆ ಅನುಗುಣವಾಗಿರಬೇಕು.
ಶಿಕ್ಷಣವು ಮಕ್ಕಳ ಸರ್ವಾಂಗೀಣ ಅಭಿವೃದ್ದಿ
ಶಿಕ್ಷಣವು ಮಕ್ಕಳ ಜ್ಙಾನ, ಸಾiರ್ಥ್ಯಮತ್ತು ನೈಪುಣ್ಯತೆಗಳ ಬೆಳವಣಿಗೆ.
ಶಿಕ್ಷಣವು ಪೂರ್ಣ ಪ್ರಮಾಣದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಬೆಳವಣಿಗೆ.
ಶಿಕ್ಷಣವು ಮಕ್ಕಳ ಸ್ನೇಹಿ ಮತ್ತು ಮಕ್ಕಳ ಕೇಂದ್ರಿಕೃತ ಮಾದರಿಯಲ್ಲಿ ಚಟುವಟಿಕೆಗಳ ಮೂಲಕ ಪರಿಶೋಧನೆ ಮತ್ತು ಕಂಡುಕೊಳ್ಳುವ ವಿಧಾನದಲ್ಲಿ ಕಲಿಕೆ.
ಶಿಕ್ಷಣವು ಬೋಧನಾ ಮಾಧ್ಯಮ ಸಾಧ್ಯವಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿರಬೇಕು.
ಶಿಕ್ಷಣವು ಮಕ್ಕಳನ್ನು ಭೀತಿ, ನೋವು, ಮಾನಸಿಕ ಕ್ಷೆಭೆಯಿಂದ ಮುಕ್ತರಾನ್ನಾಗಿ ಮಾಡುವುದು, ಮತ್ತು ಮಕ್ಕಳು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಹಾಯ ಮಾಡುವುದು.
ಶಿಕ್ಷಣವು ಮಗುವಿನ ಗ್ರಹಿಕೆಯ ಮಟ್ಟ ಮತ್ತು ಅದನ್ನು ಅಳವಡಿಸುವ ಸಾಮರ್ಥ್ಯ ಕುರಿತು ಅದನ್ನು ಅಳವಡಿಸುವ ಕುರಿತು ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ
ಶಿಕ್ಷಣವು ಯಾವುದೇ ಮಗು ಎಲಿಮೆಂಟರಿ ಶಿಕ್ಷಣವನ್ನು ಪೂರ್ಣಗೊಳಿಸುವ ತನಕ ಯಾವುದೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದ ಅವಶ್ಯಕತೆ ಇಲ್ಲ.

Read more

ಅಂಕಿ ಅಂಶಗಳು

ಶಿಕ್ಷಣದ ಕುರಿತಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ನೀಡಿರುವ ರಾಷ್ಟ್ರೀಯ ಮಟ್ಟದ ಅಂಕಿ ಅಂಶಗಳ ಕುರಿತು ತಿಳಿಯಲು ಈ ಕೆಳಗಿನ ಲಿಂಕ್‍ನ್ನು ಕ್ಲಿಕ್ ಮಾಡಿ.

http://mhrd.gov.in/statist

ಶಿಕ್ಷಣಕ್ಕಾಗಿ ನಡೆಸಿರುವ ವೆಚ್ಚಗಳ ಕುರಿತು ಅಂಕಿ ಅಂಶಗಳು

http://mhrd.gov.in/statist?field_statistics_category_tid=28

ಕರ್ನಾಟಕದ ಅಂಕಿ ಅಂಶಗಳು

http://ssakarnataka.gov.in/pdfs/aboutus/edn_profile_state.pdf

Read more

ಸರಕಾರದ ಸುತ್ತೋಲೆ

ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಭಾರತ ಸರಕಾರದ ಸುತ್ತೋಲೆಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

http://mhrd.gov.in/rte_rules

ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಸುತ್ತೋಲೆಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

http://www.schooleducation.kar.nic.in/pryedn/rte.html

Read more

ಪ್ರಮುಖ ಲಕ್ಷಣಗಳು

ಶಿಕ್ಷಣ ಹಕ್ಕು ಕಾಯಿದೆಯ ಪ್ರಮುಖ ಲಕ್ಷಣಗಳು:

೧. ಮಗು ಎಂದರೆ ೬ ರಿಂದ ೧೪ ವರ್ಷದೊಳಗಿನ ಗಂಡು ಅಥವಾ ಹೆಣ್ಣು ಮಗು.(ಅಧ್ಯಾಯ ೧. ಸೆಕ್ಷನ್-೨ಅ)
೨. ಈ ಕಾಯಿದೆಯನ್ನು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು -೨೦೦೯ಕಾಯಿದೆ ಎಂದು ಕರೆಯಲಾಗಿದೆ(ಅಧ್ಯಾಯ ೧. ಸೆಕ್ಷನ್-೧(೧))
೩. ೬ ರಿಂದ ೧೪ ವಯೋಮಿತಿಯ ಎಲ್ಲಾ ಮಕ್ಕಳಿಗೆ ೦೧ ರಿಂದ ೦೮ ನೇ ತರಗತಿಯವರೆಗೆ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕು ಇರುತ್ತದೆ. (ಅಧ್ಯಾಯ ೨. ಸೆಕ್ಷನ್-೩)
೪. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಕಾಯಿದೆಯಲ್ಲಿರುವ ಆಂಶಗಳನ್ನು ಜಾರಿಗೊಳಿಸಲು ಧನ ಸಹಾಯವನ್ನು ನೀಡಬೇಕು. (ಅಧ್ಯಾಯ ೩. ಸೆಕ್ಷನ್-೨)
೫. ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ಶಿಕ್ಷಕರನ್ನು ಮತ್ತು ಕಲಿಕಾ ಸಾಮಾಗ್ರಿಗಳನ್ನು ಒದಗಿಸಬೇಕು(ಶಿಕ್ಷಣ ಹಕ್ಕು ಕಾಯಿದೆಯ ಶೆಡ್ಯೂಲ್)
೬. ೬ ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಮಗುವನ್ನು ಯಾವೂದೇ ಶಾಲೆಗೆ ಸೇರಿಸದೇ ಇರುವಲ್ಲಿ ಅಥವಾ ಸೇರಿಸಿದ್ದರೂ ಆ ಮಗುವೂ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲಾಗದಿದ್ದಾಗ, ಆ ಮಗುವಿನ             ವಯಸ್ಸಿಗನುಗುಣವಾಗಿ ಸೂಕ್ತ ತರಗತಿಗೆ ಮಗುವನ್ನು ಸೇರಿಸಿಕೊಳ್ಳತಕ್ಕದ್ದು. (ಅಧ್ಯಾಯ ೨. ಸೆಕ್ಷನ್-೪)
೭. ಪ್ರತಿ ಶಾಲೆಯ ಆಡಳಿತ ಮಂಡಳಿ ಶಾಲಾಭಿವೃದ್ದಿ ಯೋಜನೆಯನ್ನು ರೂಪಿಸಬೇಕು. (ಅಧ್ಯಾಯ ೪. ಸೆಕ್ಷನ್-೨೧(೨))
೮. ಶಾಲಾ ಹೆತ್ತವರ ಮತ್ತು ಪಾಲಕರ ಸಮಿತಿಯ ಸದಸ್ಯರ ೫೦% ರಷ್ಟು ಮಹಿಳಾ ಸದಸ್ಯರು ಇರಬೇಕು. (ಅಧ್ಯಾಯ ೪. ಸೆಕ್ಷನ್-೨೧(೧))
೯. ಯಾವೂದೇ ವ್ಯಕ್ತಿ ಕೇಂದ್ರ ಸರಕಾರ ನಿಗದಿಗೊಳಿಸಿದ ಅರ್ಹತೆಯನ್ನು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಪಡೆದಿದ್ದರೆ ಅವರನ್ನು ಶಿಕ್ಷಕರಾಗಿ ನೇಮಿಸಬಹುದು. (ಅಧ್ಯಾಯ ೪. ಸೆಕ್ಷನ್-೨೩ (೧)(೨))
೧೦. ಖಾಸಗಿ ಶಾಲೆಗಳು ೨೫ % ತಮ್ಮ ತರಗತಿಯ ಸಂಖ್ಯೆಗನುಗುಣವಾಗಿ ಸಮಾಜದ ದುರ್ಬಲ ವರ್ಗದ ಮತ್ತು ಅನಾನುಕೂಲ ಗುಂಪಿನ ಮಕ್ಕಳಿಗೆ ಅವಖಾಶ ನೀಡಬೇಕು. ಸರಕಾರವೇ ಅವರ ವೆಚ್ಚವನ್ನು ಭರಿಸುತ್ತದೆ. (ಅಧ್ಯಾಯ ೪. ಸೆಕ್ಷನ್-೧೨(೧) ಛಿ)
೧೧. ಪ್ರಾಥಮಿಕ ಶಿಕ್ಷವನ್ನು ಪೂರೈಸಲು ಅಡ್ಡಿಯಾಗುವಂತಹ ಯಾವೂದೇ ದೇಣಿಗೆ ಮತ್ತು ಕ್ಯಾಪಿಟೇಶನ್ ಶುಲ್ಕ/ವೆಚ್ಚವನ್ನು ಮಕ್ಕಳಿಂದ ತೆಗೆದುಕೊಳ್ಳುವಂತಿಲ್ಲ. (ಅಧ್ಯಾಯ ೪. ಸೆಕ್ಷನ್-೧೩(೧))
೧೨. ಮಗುವಿಗೆ ಅಥವಾ ಮಗುವಿನ ಹೆತ್ತವರಿಗೆ ಯಾವೂದೇ ಪ್ರವೇಶ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸುವಂತಿಲ್ಲ. (ಅಧ್ಯಾಯ ೪. ಸೆಕ್ಷನ್-೨(b))
೧೩. ಪ್ರಾಥಮಿಕ ಶಿಕ್ಷಣ ಮುಕ್ತಾಯಗೊಳಿಸುವ ವರೆಗೆ ಮಗುವನ್ನು ಅನಿತ್ತೀರ್ಣಗೊಳಿಸುವಂತಿಲ್ಲ.(ಅಧ್ಯಾಯ ೪. ಸೆಕ್ಷನ್-೧೬)
೧೪. ಈ ಕಾಯಿದೆಯ ಅನುಷ್ಟಾನಕ್ಕಾಗಿ ಮೇಲ್ವಿಚಾರಣೆ ಮಾಡಲು ಸ್ಥಾಪಿತ ಆಯೋಗಗಳನ್ನು ರಚಿಸಲು ಸೂಚಿಸಲಾಗಿದೆ. (ಅಧ್ಯಾಯ ೬)
೧೫. ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ಅನುಪಾತವನ್ನು ಅನುಸರಿಸುವುದು. (ಶಿಕ್ಷಣ ಹಕ್ಕು ಕಾಯಿದೆಯ ಶೆಡ್ಯೂಲ್)
೧೬. ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. . (ಅಧ್ಯಾಯ ೧. ಸೆಕ್ಷನ್-೧(೨))
೧೭. ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಕಡ್ಡಾಯವಾಗಿದೆ. . (ಅಧ್ಯಾಯ ೫. ಸೆಕ್ಷನ್-೨(ಚಿ-h))
೧೮. ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ದಂಡನೆ ಅಥವಾ ಮಾನಸಿಕ ಹಿಂಸೆ ನೀಡುವಂತಿಲ್ಲ. (ಅಧ್ಯಾಯ ೪. ಸೆಕ್ಷನ್-೧೭(೧))
೧೯. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸುವ್ಯವಸ್ಥಿತ ಶಾಲಾ ಕಟ್ಟಡ, ಅವರಣ ಗೋಡೆ, ಸುರಕ್ಷಿತ ಕುಡಿಯುವ ನೀರು, ಗಂಡು ಹೆನ್ನು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಕಲಿಕಾ ಸಾಮಾಗ್ರಿ, ಗ್ರಂಥಾಲಯ, ಆಟದ ಮೈದಾನ, ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅಃ ಶಿಕ್ಷಕರ ನೇಮಕಾತಿ ಮಾಡುವುದು ಸರ್ಕಾರದ ಮತ್ತು ಸ್ಥಳೀಯ ಅಡಳಿತದ ಕರ್ತವ್ಯವಾಗಿರುತ್ತದೆ.(ಶಿಕ್ಷಣ ಹಕ್ಕು ಕಾಯಿದೆಯ ಶೆಡ್ಯೂಲ್)
೨೦. ದುರ್ಬಲ ವರ್ಗಗಳು, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಮೂಹಗಳ ಮಕ್ಕಳು ಯಾವುದೇ ರೀತಿಯ ತಾರತಮ್ಯಕ್ಕೆ ಗುರಿಯಾಗುವುದಾಗಲಿ ಮತ್ತು ಅದರಿಂದಾಗಿ ಎಲಿಮೆಂಟರಿ ಶಿಕ್ಷಣವನ್ನು ಪೂರೈಸಲು ಇರುವ ತೊಂದರೆಯ ನಿವಾರಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು. (ಅಧ್ಯಾಯ ೩. ಸೆಕ್ಷನ್-೯(ಅ))

Read more

ಶಿಕ್ಷಣ ಒಂದು ಹಕ್ಕು

ಕಾನೂನಿನಲ್ಲಿ ಅನುಸ್ಥಾಪಿತವಾಗಿರುವ ನಿಯಮದ ಹೊರತಾಗಿ ಯಾವೂದೇ ವ್ಯಕ್ತಿಯು ತನ್ನ ಜೀವನ ಮತ್ತು ವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತರಾಗಬಾರದು ಎಂಬುದನ್ನು ಭಾರತ ಸಂವಿಧಾನ ಕಲಂ ೨೧ ರಲ್ಲಿ ಉಲ್ಲೇಖಿಸಲಾಗಿದೆ. ಮಗುವನ್ನು ಉತ್ತಮ ಹಾಗೂ ಜವಬ್ದಾರಿಯುತ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು ಶಿಕ್ಷಣವು ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ಅದ್ದರಿಂದ ಶಿಕ್ಷಣವು ಒಂದು ಪ್ರಮುಖ ಮೂಲಭೂತ ಹಕ್ಕಾಗಿದೆ. ಶಿಕ್ಷಣವು ಮೂಲಭೂತ ಅನಿವಾರ್ಯದ ಜೊತೆಗೆ ಇತರ ಮಾನವ ಹಕ್ಕಿನ ರಕ್ಷಣೆಗೆ ಮತ್ತು ಪೋಷಣೆಗೆ ಬೇಕಾದ ಅವಶ್ಯಕ ಅಂಶವಾಗಿದೆ. ಶಿಕ್ಷಣವು ವೈಯಕ್ತಿಕ ಸ್ವಾತಂತ್ರ್ಯ ಮತ್ತು sಸಬಲೀಕರಣವನ್ನು ರೂಪಿಸಲು ಮತ್ತು ಉತ್ತಮ ಅಭಿವೃಧ್ಧಿ ಫಲಿತಾಂಶವನ್ನು ಪಡೆಯಲು ಶಿಕ್ಷಣವು ಪ್ರೇರಕ ಕ್ತಿಯಾಗಿದೆ. ಇನ್ನೂ ಸಹ ಸುಮಾರು ಮಕ್ಕಳು ಶಿಕ್ಷಣ ಅವಕಾಶದಿಂದ ವಂಚಿತರಾಗಿ ಬಡತನದಿಂದ ಜೀವಿಸುತ್ತಿದ್ದಾರೆ. ಮತ್ತು ಶಿಕ್ಷಣ ಪಡೆಯುವಲ್ಲಿಯೂ ಯಾವೂದೇ ತಾರತಮ್ಯವಿಲ್ಲದೆ ಉತ್ತಮ ಶಿಕ್ಷಣವನ್ನು ಸಂತೋಷದಾಯಕವಾಗಿ ಪಡೆಯಲು ಇನ್ನೂಸಹ ಅಸಾಧ್ಯವಾಗಿದೆ.

ಶಿಕ್ಷಣವು ಒಂದು ಸವಲತ್ತು ಅಲ್ಲ ಅದೊಂದು ಹಕ್ಕು ಶಿಕ್ಷಣವು ಒಂದು ಶಕ್ತಿಯುತ ಸಾಧನವಾಗಿದ್ದು ಒಂದು ದೇಶದ ಪ್ರಗತಿ ಆ ದೇಶದಲ್ಲಿ ದೊರೆಯುವ ಶಿಕ್ಷಣವನ್ನು ಅವಲಂಬಿಸಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಬಡತನದಿಂದ ಮೇಲೆತ್ತಿ ಉತ್ತಮ ಪ್ರಜೆಯಾಗಿ ರೂಪಿಸಲು ಸಹಕಾರಿಯಾಗಿದೆ. ಅಲ್ಲದೆ ವಂಚಿತ ಹಾಗೂ ಸಮಾಜದಲ್ಲಿ ತತ್ತರಿಸುತ್ತಿರುವ ಸಮಾಜದ ಹಲವು ವರ್ಗಗಳ ಆಶಾಕಿರಣವಾಗಿ ಅವರಿಗೆ ಮೌಲ್ಯಯುತ ಶಿಕ್ಷಣ ದೊರೆಯುವುದು ಗಗನಕುಸುಮವಾಗಿದೆ. ಶಿಕ್ಷಣವು ವ್ಯಾಪಾರೀಕರಣದಿಂದಾಗಿ ಸಮಾಜದ ಕಟ್ಟ ಕಡೆಯ ಸಮುದಾಯಕ್ಕೆ ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕಾನ್ನಾಗಿಸುವ ಅನಿವಾರ್ಯತೆ ಇದೆ. ಒಂದು ಪ್ರಜೆಗೆ ಸಂವಿಧಾನವು ಹಲವು ಹಕ್ಕನ್ನು ನೀಡಿದರೂ ಅದರಲ್ಲಿ ಶಿಕ್ಷಣವು ಒಂದು ಭಾಗವಾಗಿರಲಿಲ್ಲ. ಸ್ವಾತಂತ್ರ್ಯೋತ್ತರ ನಂತರದ ಸರಕಾರಗಳೂ ಶಿಕ್ಷಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದರೂ ಅದು ಎಲ್ಲರಿಗೂ ತಲುಪುವಲ್ಲಿ ವಿಫಲವಾಗಿದೆ.

ಶಿಕ್ಷಣವು ಎಲ್ಲಾ ಮಕ್ಕಳಿಗೂ ಒಂದು ಬದುಕಿನ ಭಾಗವಾಗಿದೆ. ಅದಕ್ಕಾಗಿ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ೫೪ ಪರಿಚ್ಛೇಧಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಲಾಗಿದೆ.ಇದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಆದರೆ ಅದನ್ನು ಯಥಾವತ್ತು ಜಾರಿಗೊಳಿಸುವಲ್ಲಿ, ಸವಾಲುಗಳನ್ನು ಎದುರಿಸುವಲ್ಲಿ ಸಾಕಷ್ಟು ವಿಫಲತೆಯನ್ನ ಕಂಡಿರುವುದಕ್ಕೆ ಇನ್ನೂ ಸಹ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗಿರುವುದು ಉದಾಹರಣೆಯಾಗಿದೆ.s ಈ ಒಡಂಬಡಿಕೆ ಸುಮಾರು ೨೩ ವರ್ಷ ಸಂದಿದ್ದರೂ ಶಿಕ್ಷಣದಿಂದ ವಂಚಿತರಾಗಿ ಇನ್ನು ಸಹ ಮಕ್ಕಳು ನಾನಾ ಕ್ಷೇತ್ರದಲ್ಲಿ ದುಡಿಯುತ್ತಿರುವುದನ್ನು ಗಮನಿಸಬಹುದು. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಬಹಳ ಪ್ರಮುಖವಾದುದು. ಇದು ಮಕ್ಕಳ ಭವಿಷ್ಯ, ಜೀವನಕ್ಕೆ ಕೊಂಡಿಯಾಗಿದೆ. ಈ ಕಾಯಿದೆಯ ಉದ್ದೇಶ ೬ ರಿಂದ ೧೪ ವರ್ಷದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸಿ ಮತ್ತು ಹಕ್ಕಾನ್ನಾಗಿಸಿದೆ. ಮಾನವ ಹಕ್ಕುಗಳ ಅವಿಭಾಜ್ಯ ಅಂಗವಾದ ಮಕ್ಕಳ ಶಿಕ್ಷಣದ ಹಕ್ಕನ್ನು ಭಾರತದ ಸಂವಿಧಾನವು ಶಿಕ್ಷಣ ಒಂದು ಹಕ್ಕು ಎಂಬುದಾಗಿ ೨೦೦೨ ರಲ್ಲಿ ಕಲಂ ೨೧ ಎ ರೂಪದಲ್ಲಿ ಸೇರ್ಪಡೆಗೊಳಿಸಲಾಯಿತು. ಇದು ಮಕ್ಕಳನ್ನು ವಿವಿಧ ರೀತಿಯ ಶೋಷಣೆ, ಅನ್ಯಾಯ ಹಾಗೂ ದೌರ್ಜನ್ಯಗಳಿಂದ ರಕ್ಷಿಸಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟದಂತಹ ಕ್ರೂರ ಸಾಮಾಜಿಕ ಪಿಡುಗುಗಳಿಂದ ರಕ್ಷಿಸುವುದು ಈ ಕಾಯಿದೆಯ ಒಂದು ಮುಖ್ಯ ಆಶಯವಾಗಿದೆ. ಮಕ್ಕಳೆಲ್ಲರೂ ಶಾಲೆಯಲ್ಲಿರುವಂತೆ ಮಾಡುವುದರ ಮೂಲಕ ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ಹತ್ತಿಕ್ಕುವುದು ಹಾಗೂ ಮಕ್ಕಳನ್ನು ಉತ್ತಮ ಹಾಗೂ ಜವಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವುದೆ ಈ ಕಾಯಿದೆಯ ಆಶಯವೆಂಬುದನ್ನು ಒಪ್ಪಿಕೊಳ್ಳಬೇಕು.

ಈ ಕಾಯಿದೆಯನ್ನು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ಆಗಿದ್ದು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಈ ಕಾಯಿದೆ ಅನ್ವಯಿಸುತ್ತದೆ. ೬ ರಿಂದ ೧೪ ವರ್ಷದವರೆಗಿನ ಗಂಡು ಅಥವಾ ಹೆಣ್ಣು ಮಗು ೧ನೇ ತರಗತಿಯಿಂದ ೮ನೇ ತರಗತಿವರೆಗಿನ ಶಿಕ್ಷಣ, ಮಾನ್ಯತೆ ಪಡೆದು ಎಲಿಮೆಂಟರಿ ಶಿಕ್ಷಣವನ್ನು ಬೋಧಿಸುತ್ತಿರುವ ಯಾವುದೇ ಶಾಲೆ (ಶಾಲೆಯಿಂದ ದೇಣಿಗೆ ಪಡೆಯುತ್ತಿರುವ ಅಥವಾ ಪಡೆಯದಿರುವ ಶಾಲೆಗಳು) ಯಿಂದ ಪಡೆಯುವುದು. ಅಲ್ಲದೆ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಸ್ಥಳಿಯ ಸರಕಾರಗಳು ತಮ್ಮದೇ ಆದ ಜವಬ್ದಾರಿ ಮತ್ತು ಕರ್ತವ್ಯಗಳನ್ನು ಹೊಂದಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ/ ವರ್ಗ ಇತರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಅಥವಾ ಆರ್ಥಿಕ, ಸಾಮಾಜಿಕ , ಸಾಂಸ್ಕೃತಿಕ, ಭಾಷವಾರು, ಲಿಂಗ ಅಥವಾ ಇನ್ನಿತರ ಯಾವುದೇ ಕಾರಣಗಳಿಂದಾಗಿ ಹಿಂದುಳಿದ ಗುಂಪುಗಳೆಂದು ಸೂಕ್ತ ಸರ್ಕಾರಗಳಿಂದ ಗುರುತಿಸಿರುವ ಗುಂಪುಗಳಿಗೆ ಸೇರಿದ ಮಗು ಕೂಡ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಲೇಬೇಕು ಎಂಬುದು ಈ ಕಾಯಿದೆಯ ಆಶಯ.

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-೨೦೦೯ ೬ ರಿಂದ ೧೪ ವರ್ಷದ ಎಲ್ಲಾ ಮಕ್ಕಳು ಉಚಿತವಾಗಿ ಅಥವಾ ೮ನೇ ತರಗತಿಯನ್ನು ಪೂರ್ಣಗೊಳಿಸುವ ಶಿಕ್ಷಣವನ್ನು ಪಡೆಯುವಂತಾಗಲು ಸಹಕಾರಿಯಾಗಿದೆ. ಅಲ್ಲದೆ ಮಕ್ಕಳ ಮೇಲೆ ಅಗುತ್ತಿರುವಂತಹ ದೈಹಿಕ ಮತ್ತು ಮಾನಸಿಕ ಹಿಂಸೆಗಳಿಂದ ಮಕ್ಕಳನ್ನು ರಕ್ಷಿಸಿ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಬಲ್ಲದು.

ಕಸ್ತೂರಿ ಬೊಳುವಾರ್

Read more

Childline Se Dosthi Week

ಚೈಲ್ಡ್ ಲೈನ್ ಮಂಗಳೂರು-1098
ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ-2017
2017ನೇ ನವೆಂಬರ್ 14ರಿಂದ 20ರ ವರೆಗೆ

“ಚೈಲ್ಡ್ ಲೈನ್ ಸೆ ದೋಸ್ತಿ” ಎನ್ನುವುದು ಒಂದು ವಾರಗಳ ಕಾಲ (ನವೆಂಬರ್ 14ರಿಂದ 20ರ ವರೆಗೆ) ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಆಂದೋಲನವಾಗಿದೆ. ಇದರ ಗುರಿಯು ಸಾಮಾನ್ಯ ನಾಗರಿಕರನ್ನು ಮತ್ತು ಫಲಾನುಭವಿಗಳನ್ನು ಚೈಲ್ಡ್ ಲೈನ್-1098ನ ಜೊತೆ ಕೈ ಜೋಡಿಸುವಂತೆ ಮಾಡುವುದು. ಈ ಅಭಿಯಾನವು ದೇಶದಾದ್ಯಂತ ನಡೆಯುವ ಆನೇಕ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ.

ಚೈಲ್ಡ್ ಲೈನ್ ಸೆ ದೋಸ್ತಿಯ ಕಾರ್ಯ ವ್ಯಕ್ತಿಯು ಯಾವುದೇ ವೃತ್ತಿಯಲ್ಲಿದ್ದರೂ ಮಕ್ಕಳ ಸಹಾಯವಾಣಿಯ ಬಗ್ಗೆ ತಿಳಿದುಕೊಂಡು ಮಕ್ಕಳಿಗೆ ರಕ್ಷಣೆ ಕೊಡಲು ಮುಂದೆ ಬರುವಂತೆ ಮಾಡುವುದು.

ಈ ಅಭಿಯಾನದ ಮುಖ್ಯ ಉದ್ಧೇಶವು ಜನರಲ್ಲಿ ಚೈಲ್ಡ್ ಲೈನ್-1098 ಬಗ್ಗೆ ಅರಿವುವನ್ನು ಮೂಡಿಸುವುದಾಗಿದೆ.

ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಚೈಲ್ಡ್ ಲೈನ್-1098 ತನ್ನ ಸಹಾಯ ಹಸ್ತವನ್ನು ಚಾಚುತ್ತದೆ.

ನೀವು ಚೈಲ್ಡ್ ಲೈನ್-1098 ಜೊತೆ ದೋಸ್ತಿ ಅಗಬೇಕಿದ್ದಲ್ಲಿ, ನಿಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸಿಕೊಂಡು ಹಾಗೂ ಮಕ್ಕಳಿಗೆ ಅವಶ್ಯಕತೆಯಿದ್ದಲ್ಲಿ ಕ್ರಮ ಕೈಗೊಳ್ಳಲು ಚೈಲ್ಡ್ ಲೈನ್-1098ಗೆ ತಿಳಿಸುವುದು.

ನೀವು ಮಕ್ಕಳ ರಕ್ಷಣೆಯಲ್ಲಿ ಚೈಲ್ಡ್ ಲೈನ್-1098ನ ಸ್ವಯಂ ಸೇವಕರಾಗಬಹುದು.

“ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ” ಅಂಗವಾಗಿ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ “ಚೈಲ್ಡ್ ಲೈನ್ ಸೆ ದೋಸ್ತಿ” ಸಪ್ತಾಹದ ಎಲ್ಲಾ ಕಾರ್ಯಕ್ರಮಗಳನ್ನು ಪಡಿ ಮಂಗಳೂರು,ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ.ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ.ಜಿಲ್ಲೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ದ.ಕ, ರೇಡಿಯೋ ಬಿಗ್ ಎಫ್.ಎಮ್ 92.7 ರೇಡಿಯೋ ಸಾರಂಗ್ 107.8, ಇವರ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

ಕಾರ್ಯಕ್ರಮದ ವಿವರ
(ನವೆಂಬರ 14 ರಿಂದ 20ರ ತನಕ)
14/11/2017
ಕಾರ್ಯಕ್ರಮದ ಉದ್ಘಾಟಣಾ ಸಮಾರಂಭ
ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹದ ಅಂಗವಾಗಿ ವಿವಿದ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯರ ನೇತೃತ್ವದಲ್ಲಿ ದಿನಾಂಕ 14/11/2017ರಂದು ಪೂರ್ವಾಹ್ನ 10.00 ಕ್ಕೆ ಸರಿಯಾಗಿ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಪ್ರತಿಜ್ಞಾ ಸ್ವೀಕಾರ ಹಾಗೂ ಮಾಹಿತಿ ಕಾರ್ಯಗಾರವು ಅಪರಾಹ್ನ 12 ಗಂಟೆಯ ತನಕ ನಡೆಯಲಿದೆ.

15/11/2017
ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಗಾರ
ಚೈಲ್ಡ್ ಲೈನ್ ಸೆ ದೋಸ್ತಿ ದೋಸ್ತೀ ಸಪ್ತಾಹದ ಅಂಗವಾಗಿ ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಗಾರವು ಮಂಗಳೂರಿನ ಬಲ್ಮಟ ಕಾಲೇಜಿನ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ನುರಿತ ಸಂಪನ್ಮೂಲಗಳಿಂದ ಮಾಹಿತಿ ಕಾರ್ಯಗಾರವು ಪೂರ್ವಾಹ್ನ 10 ಗಂಟೆಯಿಂದ 11 ಗಂಟೆಯ ತನಕ ನಡೆಯಲಿದೆ.

16/11/2017
ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮೌನಜಾಥಾ
ದಿನಾಂಕ 15/11/2017 ರಂದು ಕಾರ್ಯಗಾರಕ್ಕೆ ಬಂದಿರುವ ಮಕ್ಕಳಿಂದ ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮೌನಜಾಥಾವು ಬಲ್ಮಟ  ಕಾಲೇಜಿನ ಹೊರಗಡೆ ನಡೆಯಲಿದೆ

17/11/2017
ಬಾಲ್ಯವಿವಾಹ, ಬಾಲಭಿಕ್ಷಾಟಣೆ, ಬಾಲಕಾರ್ಮಿಕ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮ
ದಿನಾಂಕ-17/11/2017ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್, ಲಾಲ್‍ಬಾಗ್ ಬಂದರ್, ದಕ್ಕೆ ಹಾಗೂ ಕದ್ರಿ ಪಾರ್ಕ್ ಬಳಿ ಇರುವ ಹೋಟೆಲ್, ಗ್ಯಾರೇಜ್, ರಿಕ್ಷಾ ಪಾರ್ಕ್, ಬಸ್ ನಿಲ್ದಾಣಗಳಲ್ಲಿ ಕರಪತ್ರಗಳನ್ನು ನೀಡುವುದರೊಂದಿಗೆ ಬಾಲ್ಯವಿವಾಹ, ಬಾಲಭಿಕ್ಷಾಟಣೆ, ಬಾಲಕಾರ್ಮಿಕ ವಿಷಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸುರಕ್ಷಾ ಬ್ಯಾಂಡ್‍ನ್ನು ಕಟ್ಟುವುದು.

18/11/2017
ಬಾಲ್ಯವಿವಾಹ ಮುಕ್ತಗ್ರಾಮ, ಮಗು ಸ್ನೇಹಿ ಶಾಲೆ ವಿಷಯದ ಕುರಿತು ಸಮಿತಿ ರಚಿಸಿ ಕಾರ್ಯಕ್ರಮ ನೀಡುವುದು
ಬಾಲ್ಯವಿವಾಹ ಮುಕ್ತಗ್ರಾಮ, ಮಗು ಸ್ನೇಹಿ ಶಾಲೆ, ಹಾಗೂ ಬೆಂಗಳೂರಿನ ಓಯಸಿಸ್ ಸಂಸ್ಥೆಯವರಿಂದ ಮಕ್ಕಳ ಸಾಗಾಣಿಕೆಯ ಕುರಿತ ಬೀದಿನಾಟಕ, ಬೈಕ್ ರ್ಯಾಲಿ ಹಾಗೂ ಮಂಗಳೂರಿನ ಮೀನಾಕಲ್ಯ ಹಾಗೂ ಪಣಂಬೂರ್ ಬೀಚ್‍ನಲ್ಲಿ ಬೀದಿನಾಟಕ, ಬೈಕ್ ರ್ಯಾಲಿ ಮತ್ತು ಚೈಲ್ಡ್‍ಲೈನ್ ಸ್ಟಾಲ್ ಹಾಕುವುದರ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ.

19/11/2017
ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಕಾರ್ಯಕ್ರಮ
ಪೂರ್ವಾಹ್ನ 10 ರಿಂದ 12 ರ ತನಕ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಕಾರ್ಯಕ್ರಮ ಮಂಗಳೂರಿನ ಕದ್ರಿ ಪಾರ್ಕ್, ಸೆಂಟ್ರಲ್ ರೈಲ್ವೇ ನಿಲ್ದಾಣ, ಲಾಲ್‍ಬಾಗ್ ಕೆ.ಎಸ್.ಆರ್.ಟಿ.ಸಿ, ವಿವಿದ ಜನಸೇರುವ ಸ್ಥಳಗಳಲ್ಲಿ ಚೈಲ್ಡ್‍ಲೈನ್ ಸ್ಟಾಲ್ ಹಾಕುವ ಮೂಲಕ ಅರಿವು ಕಾರ್ಯಕ್ರಮವು ನಡೆಯುವುದು

20/11/2017
ವಿಶೇಷ ಮಕ್ಕಳಿಗೆ ವಿವಿದ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ವಿತರಣೆ ಹಾಗೂ ದೋಸ್ತಿವೀಕ್ ಸಪ್ತಾಹ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ
ಮಂಗಳೂರಿನ ಸುರತ್ಕಲ್ ಬಳಿ ಇರುವ ಲಯನ್ಸ್ ಸೇವಾ ಕೇಂದ್ರದಲ್ಲಿ ವಿಶೇಷ ಮಕ್ಕಳಿಗೆ ವಿವಿದ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ವಿತರಣೆಯು ಪೂರ್ವಾಹ್ನ 10 ರಿಂದ 12 ಗಂಟೆಯ ತನಕ ನಡೆಯಲಿದೆ ಹಾಗೂ ಅಪರಾಹ್ನ 2. ಗಂಟೆಗೆ ಸರಿಯಾಗಿ ವಿವಿಧ ಇಲಾಖೆಯ ಅಧಿಕಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮದ ಮುಕ್ತಾಯ ಸಮಾರೋಪ ನಡೆಯಲಿದೆ.

Read more

Frequently Asked Questions

1. What is PADI?
PADI is a registered society that aims at working towards education for creation of just humane society.

2. What does it work for?
It works for quality education and child rights.

3. What is the full form of PADI?
It is not an abbreviation, but the meaning of PADI is equal.

4. What is VALORED? How is it connected to PADI?
VALORED is a project of PADI. VALORED stands for value oriented education.

5. Which are the other projects of PADI?
The other projects are CHILD LINE, CACL-K and special Educators for special children.

6. What do you mean by quality education?
Such education where values, such as bias views on gender discrimination, child rights, girl child education, are not inculcated in the children for a healthy and loving upbringing.

7. In which areas does PADI/VALORED work?
It works in two districts namely Udupi and D.K. In Udupi it has adopted 3 taluks  namely,Udupi, Kundapura and Karkal. In D.K it has adopted 5 taluks namely Mangalore,       Bantwala,Putter,Sulya and Belthangady.

8. What is the method adopted to spread the concept of VALORED?
In each of the above taluks an education resource centre has been formed and it is through these resource centers that VALORED’s activities, programmes are carried out.

9. Who are the members of this Resource Centre?
Representatives from the local community based organizations, teachers, SDMC members, youth leaders, Panchyath members, media personal, local NGOs, local community leaders, educational activists, women activists, Dalith activists and child right activists.

10. What are the activities they carry out?
Awareness and training programmes on Child rights, quality education, adolescent education, RTE, SDMC, gender, HIV/AIDS, various acts related to children (J.J Act  POCSO,etc).

11. Is the RC registered?
The 5 RCs of D.K and 3 RC’s of Udupi have got together to form into two Federations in these two districts i.e. D.K Federation and Udupi Federation.

12. What is CHILDLINE?
This is a project to help the children. CHILDLINE 1098 is a 24×7 toll free emergency  service for children in need of care and protection.

13. What help does child line give?
It has a toll free number 1098 that you can call when you need help.

14. Who can dial this number?
Any child/concerned adult on behalf of the child can dial 1098 to avail of emergency assistance.

15. When do we call this number?
Any time of the day or night, it is a 24 hour free service call number.

16. Who sponsors this programme?
CHILDLINE is a civil-society-government partnership under the aegis of the Ministry of  Women and Child Development (MWCD), Government of India.

17. What is CACL-K?
Campaign Against Child Labour in Karnataka.

18. What does it works for
To strengthen organizations of children, youth, vulnerable women and community members in order to end child marriage and ensure protection of Child Rights.

19. How it works?
Advocating and lobbying against child marriage through campaigns,rally,Jatha and publication of IEC materials to reduce child marriage.

20. What is the meaning of PAFRE?
People Alliance for Fundemental Right to Education.

21. Why was it formed?
For the stock taking of RTE implementation in Karnataka state and lobbying with the Govt.to set right the loop holes noticed through the stock taking report.

22. What is CFE-QES?
CFS-QES stands for Child Friendly Environment that supports Quality Education in Schools, a project of PADI that is supported by EU.

Read more
error: Content is protected !!
PADI Valored